ಹೊಸ ಮನುಷ್ಯ: “ ಈ ಅಭಿವೃದ್ಧಿ ಇನ್ನು ಸಾಕು" ಒಂದು ಚರ್ಚೆ

 ಹೊಸ ಮನುಷ್ಯ ಮಾಸಿಕ ಪತ್ರಿಕೆಯು ಡಿ.ಎಸ್. ನಾಗಭೂಷಣ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದೆ. ಇಂದಿನ ಕರೋನ ಸಮಸ್ಯೆಯು ನಮ್ಮ ಬದುಕಿನ ಬಗೆಗೆ, ಮುಖ್ಯವಾಗಿ "ಅಭಿವೃದ್ಧಿ" ಎಂಬುದರ ಬಗೆಗಿನ ನಮ್ಮ ಚಿಂತನೆಗಳನ್ನು ಪ್ರಶ್ನಿಸಬೇಕಾದ ಅನಿವಾರ್ಯತೆಯನ್ನು ಜೂನ್ ಸಂಚಿಕೆಯಲ್ಲಿ ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿ ಹಲವರು ಭಾಗಿಯಾಗಿ ಅವರ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.  ಈ ಚರ್ಚೆಯು ಬಹಳ ಮಂದಿಗೆ ತಲುಪಬೇಕಾದ ಅವಶ್ಯಕತೆಯಿರುವುದರಿಂದ ಕೆಳಗಿನ ಕೊಂಡಿಯಲ್ಲಿ ನೀವು ಲೇಖನಗಳನ್ನು ಓದಬಹುದು.  ಈ ಲೇಖನಗಳನ್ನೊಳಗೊಂಡ PDF ಆವೃತ್ತಿ ಕೆಳಗೆ ಲಭ್ಯವಿದೆ.  

(ಈ ನೀಲಿ ಬಣ್ಣದ ಕೊಂಡಿಯನ್ನು ಕ್ಲಿಕ್ಕಿಸಿ :) 

ಹೊಸಮನುಷ್ಯ : ಈ ಅಭಿವೃದ್ಧಿ ಇನ್ನು ಸಾಕು 

ಈ ಚರ್ಚೆಯಲ್ಲಿ ಭಾಗಿಯಾದವರ ಲೇಖನಗಳ ವಿವರಗಳು ಇಂತಿವೆ :

೧. ವೈಯುಕ್ತಿಕತೆ ಮತ್ತು ಸಮುದಾಯ ಪ್ರಜ್ಞೆ : ಲಕ್ಷ್ಮೀಶ ತೋಲ್ಪಾಡಿ

೨. ಈ ಅಭಿವೃದ್ಧಿ ಇನ್ನು ಸಾಕು : ಡಿ. ಎಸ್. ನಾಗಭೂಷನ್

೩. ಇದು ಏಕಾಂಗಿಯಾಗಿ ಮಾಡುವ ಕೆಲಸವಲ್ಲ: ರಾಜೇಂದ್ರ ಚೆನ್ನಿ

೪. ಕರೋನ ಕಲ್ಪಿಸಿದ ಅವಕಾಶ : ಅಕ್ಷರ ಕೆ. ವಿ 

೫. ಬೆಳೆ ಭೂಮಿಯೊಳಗೊಂದು ಪ್ರಳಯದ ಕಸ ಹುಟ್ಟಿ: ಗೀತ ವಸಂತ

೬. ನನ್ನ ಜೊತೆ ಇರುವುದು ಕೇವಲ ನಾಲ್ಕು ಜೊತೆ ಖಾದಿ ಬಟ್ಟೆಗಳು : ಸಂತೋಷ್ ಕೌಲಗಿ

೭. ಆರಂಭಕ್ಕೆ ಐದು ಸರಳ ಸೂತ್ರಗಳು :: ಕೇಶವ ಎಸ್ ಕೊರ್ಸೆ