ಪುಸ್ತಕ ಪರಿಚಯ : ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ



ಬಹುಶೃತ ವಿದ್ವಾಂಸರಾದ, ನಾಲ್ಕು ಸಂಪುಟಗಳಲ್ಲಿ ನಾಟ್ಯ ಶಾಸ್ತ್ರದ ಪದವಿವರಣ ಕೋಶವನ್ನೂ, ಸುಮಾರು ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಶ್ರೀ ರಾಧಾವಲ್ಲಭ ತ್ರಿಪಾಠಿಯವರು ೨೦೧೩ರಲ್ಲಿ ಜಯಪುರದ ರಾಷ್ಟ್ರೀಯ ಸಂಸ್ಕೃತ ಅಕಾಡೆಮಿಯಲ್ಲಿ ನೀಡಿದ ವಿಶೇಷ ಉಪನ್ಯಾಸವನ್ನು ಅಕಾಡೆಮಿಯು ಪುಸ್ತಕ ರೂಪದಲ್ಲಿ ಪ್ರಕಟಿಸಿತ್ತು. "ನಾಟ್ಯ ಶಾಸ್ತ್ರದ ವಿಚಾರ" ಎಂಬ ನಾಟ್ಯಶಾಸ್ತ್ರದ ಕುರಿತಾದ  ಕೃತಿಯನ್ನು  ರಚಿಸಿರುವ ಶ್ರೀ ಅತ್ತಿಮುರುಡು ವಿಶ್ವೇಶ್ವರರವರು   "ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ" ಎಂಬ ಹೆಸರಿನಲ್ಲಿ  ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ನಾಟ್ಯ ಶಾಸ್ತ್ರದ ಕುರಿತಾಗಿ ಕನ್ನಡದಲ್ಲಿ ಭರತನ ನಾಟ್ಯ ಶಾಸ್ತ್ರದ ಕನ್ನಡ ಅನುವಾದವನ್ನು ಶ್ರೀಯುತ ಶ್ರೀರಂಗರು ಮಾಡಿರುವರು. ನಂತರ ಸುಬ್ಬಣ್ಣನವರು ಧನಂಜಯನ ದಶರೂಪಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಎರಡೂ ಕೃತಿಗಳೂ ಬೃಹತ್ ಸ್ವರೂಪದ್ದಾಗಿದ್ದು ವಿಸ್ತಾರವಾದ ಓದನ್ನು ಬೇಡುತ್ತವೆ. ಆದರೆ "ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ"ಯೊಂದು ಸಣ್ಣ, ಅರವತ್ತು ಪುಟಗಳ  ಹೊತ್ತಿಗೆಯಾದರೂ ವಿಸ್ತಾರದಲ್ಲಿ ನಾಟ್ಯ ಶಾಸ್ತ್ರದ ಪ್ರಾಥಮಿಕ ಸ್ವರೂಪ, ಚರಿತ್ರೆ ಎಲ್ಲಕ್ಕಿಂತಲೂ ಮುಖ್ಯವಾಗಿ ನಾಟ್ಯ ಶಾಸ್ತ್ರದೊಂದಿಗೆ ನಡೆದ ತತ್ತ್ವ ಶಾಸ್ತ್ರದ, ತತ್ತ್ವ ಜಿಜ್ಞಾಸೆಗಳೆಲ್ಲವನ್ನು ಒಂದೇ ಹರವಿನಲ್ಲಿ ಕಟ್ಟಿಕೊಡುತ್ತದೆ. ಹೀಗಾಗಿ ನಾಟ್ಯ ಶಾಸ್ತ್ರದ ಪ್ರಾಥಮಿಕ ಪರಿಚಯಕ್ಕೆ , ಅದರ ತತ್ತ್ವಜಿಜ್ಞಾಸೆಯ ಬಗ್ಗೆ ತಿಳಿಯಲಿಚ್ಛಿಸುವವರಿಗೆ ಇದೊಂದು ಅತ್ಯತ್ತಮ  ಕೃತಿಯಾಗಿದೆ.

ಈ ಕೃತಿಯು ೧೮೬೫ರಲ್ಲಿ ಮೊಟ್ಟ ಮೊದಲಿಗೆ ನಡೆದ ನಾಟ್ಯಶಾಸ್ತ್ರ ಕೃತಿಯ ಸಂಪಾದನೆ ಅದರ ಹುಡುಕಾಟದ  ಕಾರಣಗಳಿಂದ ಆಪ್ತವಾಗಿ ಆರಂಭವಾಗುತ್ತದೆ. ಸಂಸ್ಕೃತ ಸಾಹಿತ್ಯ, ತತ್ತ್ವಶಾಸ್ತ್ರ  ಇತರೆ ಕೃತಿಗಳ ಸಂಪಾದನ ಕಾರ್ಯದ ಒಟ್ಟು ಹಿನ್ನೆಲೆಯು ಇಲ್ಲಿ ಆವಿಷ್ಕಾರಗೊಂಡಿದೆ. ನಂತರ ನಾಟ್ಯ ಶಾಸ್ತ್ರದ ಆಧಾರದ ಮೇಲೆ ನಡೆದ ಸಂಸ್ಕೃತ ನಾಟಕಗಳ ವಿವರಗಳು, ಅವುಗಳ ಆಧಾರದ ಮೇಲೆ ಜರುಗಿದ ಭಾರತೀಯ ನಾಟಕಗಳ ಬಗೆಗಿನ ವಿಷ್ಲೇಷಣೆಗಳು ಸಾಗುತ್ತವೆ.  ಇನ್ನು ನಾಟ್ಯ ಶಾಸ್ತ್ರದ ವಿಷಯ, ಪ್ರಯೋಜನ ಸಂಬಂಧ, ಅದರ ಪೌರಾಣಿಕ ಕಥೆಗಳು, ಅದರ ತತ್ತ್ವಶಾಸ್ತ್ರ ಹೀಗೆ  ಬಹು ವಿಸ್ತಾರವಾದ ವಿಷಯಗಳನ್ನೆಲ್ಲಾ ಕಿರು ಹೊತ್ತಿಗೆಯಲ್ಲಿ ರೂಪಿಸಿದ್ದು ಸಾಧನೆಯೇ ಸರಿ. ಒಟ್ಟಿನಲ್ಲಿ ಈ ಕೃತಿಯನ್ನು ಓದಿದ ನಂತರ ನಾಟ್ಯಶಾಸ್ತ್ರದ ಬಗೆಗಿನ ಎಲ್ಲಾ ಕೃತಿಗಳನ್ನು ಓದಬೇಕೆನಿಸಿದ್ದು ನಿಜ. 

ಇಲ್ಲಿನ ಭಾಷೆಯು ಬಹಳ ಇಷ್ಟವಾಯಿತು. ಕೃತಿಯ ಮಹತ್ವವನ್ನು ತೋರುವ ಒಂದಿಷ್ಟು ಸಾಲುಗಳು. 

"ಅಭಿನವ ಗುಪ್ತರ ದೃಷ್ಟಿಯಲ್ಲಿ ಕಲೆಯು ಭ್ರಮೆಯಾಗಲೀ, ಆರೋಪವಾಗಲೀ ಅಲ್ಲ. ನಿಶ್ಚಯಾತ್ಮಕ ಜ್ಞಾನವಾಗಲೀ ಅಥವಾ ಅಧ್ಯವಸಾಯವಾಗಲೀ ಅಲ್ಲ; ಅದು ರಸಸ್ವಭಾವದ ವಸ್ತುವಾಗಿದೆ. ಕಲೆಯು ರಸವಾಗಿದೆ ಮತ್ತು ರಸವು ಕಲೆಯಾಗಿದೆ. ಇದೇ ರಸವು ಪರಮತತ್ತ್ವವೂ ಆಗಿದೆ. ಆದುದರಿಂದ ರಸಾನುಭೂತಿಯು ಪರಮ ತತ್ತ್ವದ ಅನುಭೂತಿಯೂ ಆಗಿರುತ್ತದೆ.”


“ನಿಷ್ಕರ್ಷವಾಗಿ ಭರತಮುನಿಯ ರಸದ ಕಲ್ಪನೆಯು ಏಕತಾನತೆಯನ್ನು ಪ್ರತಿರೋಧಿಸುತ್ತದೆ. ಯಾವುದೇ ರಸವು ಏಕಾಕಿಯಾಗಿ ಬರುವುದಿಲ್ಲ. ಯಾವುದೇ ಒಂದು ಪುರುಷಾರ್ಥವು ಎಲ್ಲಿಯವರೆಗೆ ಅನ್ಯ ಪುರುಷಾರ್ಥಗಳಲ್ಲಿ ಸಮನ್ವಿತವಾಗಿ ಇರುವುದಿಲ್ಲವೋ ಅಲ್ಲಿಯವರೆಗೆ ತನ್ನಷ್ಟಕ್ಕೆ ತಾನೇ ಪೂರ್ಣವಾಗಲಾರದು.”


“ಕಲಾಸೃಷ್ಟಿಯ ಸಮಯದಲ್ಲಿ ಕವಿ ಅಥವಾ ಕಲಾವಿದನು ಶಿವನ ಭೂಮಿಕೆಯಲ್ಲಿರುತ್ತಾನೆ ಎಂದಾದರೆ, ಕಲೆಯ ಅನುಭವದ ಸ್ಥಿತಿಯಲ್ಲಿ ಪ್ರೇಕ್ಷಕನೂ ಈಶ್ವರರೂಪಿಯಾಗಿರುತ್ತಾನೆ. ಚಿತ್ತವು ಕಲೆಯ ರಚನೆ ಮತ್ತು ಅನುಭವ ಎರಡರಲ್ಲಿಯೂ ಶಿವಸಮಾನವಾಗಿರುತ್ತದೆ.”


ಪುಸ್ತಕ ಕೊಳ್ಳಲು ಈ ಕೊಂಡಿಗಳನ್ನು ಬಳಸಬಹುದು ---  

ಅಭಿನವ 

ನವಕರ್ನಾಟಕ

ದೃಷ್ಯಂ ಶರೀರಂ

 



ದೇಹವು ಕಾಣುತ್ತಿದೆ

ಕಾಣುತ್ತಿದೆ ದೇಹವು

ಹೀಗಿರಲಾಗಿ…………



ಪ್ರತ್ಯಕ್ಷ ಪ್ರಮಾಣ ಪ್ರಕ್ರಿಯೆ

ಸಮಾನ ಅಂಶ

ಪ್ರ" ಎಂಬಕ್ಷರ

ಹಾಗೂ ಪ್ರ ಸ್ವರಾಕ್ಷರವಲ್ಲ

ಎಂಬುದೊಂದು ಪ್ರತಿಮೆ


ಎರಡರ ವರ್ಗಮೂಲದ ಅಂಕಿಗಳು

ಅನಂತಕ್ಕೆ ಅಂಕೆಯಿಲ್ಲದೆ ಬೆಳೆವಾಗ

ಧುತ್ತನೆ ನಿಲ್ಲಿಸಿಬಿಡುವುದಿದೆಯಲ್ಲ

ಅದನ್ನು ಜಗತ್ತಿನ ಸೃಷ್ಟಿ ಎನ್ನಬಹುದು.



ಕೇಕೆ ಹಾಕುವ ಭಾಗ್ಯವು

ಒಂಥರಾ ರೋಚಕ

ಬಣ್ಣಕ್ಕೆ ಒಂದೊಂದು ಸಂಖ್ಯೆಯನ್ನು

ಸಮಾಂತರಿಸಿ ನಮೂದಿಸಿದಾಗ

ಚಿತ್ರವು ಒಂದು ಸಂಖ್ಯೆ


ಕಟ್ಟುವುದೆಂದರೆ ಹೀಗೇನೆ


ಮೂಲೆ ಮುಟ್ಟಿದಾಕ್ಷಣ ಎದುರು

ಗೋಡೆಯಲ್ಲಿ ಪ್ರತ್ಯಕ್ಷ

ಅಲ್ಲಿಂದ

ನೆಲದ ಕೊನೆ ಮುಟ್ಟಿದಾಗ

ಆಕಾಶದಲ್ಲಿ ಮತ್ತೆ

ಇದೊಂದು ಜ್ಯಾಮಿತೀಯ ಆಕಾರ


ಇದ್ದಿಲಲ್ಲಿ ತೀಡಿದ ಕಣ್ಣ ಹುಬ್ಬು

ಮೂರ್ತಿ ಸಿದ್ಧ

ಸೊಂಟದಲ್ಲೊಂದು ಕಮಲಪುಷ್ಪವು

ಜಾತ್ರೆಯ ಪೂರ್ವಾರ್ಧದಲ್ಲಿ

ಸಲ್ಲಮುದ್ದೆ ನಾಲ್ಕು ದಿಕ್ಕುಗಳಲ್ಲಿ


ಮೊದಲ ಲಿಪಿ ಹಾಡು

ಆ ಹಾಡು ತನಗೆ ಬರುತ್ತಿತ್ತೆಂದವನದು

ಬರೀ ಮಣ ಮಣ

ಕೇಳಿದರೆ, ಹಿಂದೆ ಹಿಂದೆ ಹಿಂದೆ ಇನ್ನೂ ಹಿಂದೆ………


ಅಡಿಟಿಪ್ಪಣಿಯಲ್ಲಿನ ರೇಖಾಚಿತ್ರಕ್ಕೆ

ಬಣ್ಣವು ಬೇಕಿಲ್ಲ – ಕೈ ಬರಹ

ಬಲು ಒರಟು - ಸ್ಥಳಾವಕಾಶ

ಸಂಕೀರ್ಣ ದ್ವಂದ್ವ ರಚನೆ

ಅರಳೀ ಕಟ್ಟೆಯ ಹರಟೆ

ಛಂದಸ್ಸಿನ ಮಿತಿ ಅಲಂಕಾರ

ಅದೇ ಹಾಡು ಹಸೆ ಕುಣಿತ

ಹರಿಕತೆ ದಾಸರಿಗೆ ಮರೆವು

ಕಥೆಯಲ್ಲಿನ ಸಂಬಂಧಗಳೆಲ್ಲಾ ಅದಲು ಬದಲು



ವಯ್ಯಾಕರಿಣಿಗೆ ದಕ್ಕದೆ

ತರುಣಿ ಬೆಂಬತ್ತಿ ಹಠವಿಡಿದಾಗ

ಹಂತಗಳಿಗೆ ಎಗ್ಗಿಲ್ಲದ ಸುಗ್ಗಿಯ

ಜೊತೆಗೆ ಒಂದೇ ಹಠ, ಆಟ ಹೂಡಿದ

ತರುಣಿಗೆ ವರ್ಣಕ್ಕೆ ಬಣ್ಣ ಹಚ್ಚುವ

ತವಕ ಬಣ್ಣದಿಂತೆಗೆವ ಚಿತ್ರಕ್ಕೆ

ಪ್ರದರ್ಶನದ ಗೀಳು


ಪುಳಕ್ -

ಸಮೀಕರಣವಿಲ್ಲ

ಆಗ ಕರೆಯುತ್ತೆ ಕರಿ ಮೀನು

ಕೂಗುತ್ತೆ


ಆಕಾಶದಲ್ಲಿ ಹಾರುವ ಮೀನ

ಪಥದಲ್ಲಿ ಹಬ್ಬಿದ ಬಳ್ಳಿಯಲ್ಲರಳಿದ

ಹೂವನು ಬಯಸಿದ ತರುಣಿಯ

ಮನವಗೆದ್ದ ಓ ಮುದುಕನೆ

ಚಿರ ಯುವಕನೆ

ಒಂಟಿ ನಕ್ಷತ್ರದ ಸುತ್ತೆಲ್ಲ

ಬಣ್ಣದ ರಾಶಿ

ಕಡುಗಪ್ಪು ಆಕಾಶ

ಸೀಳಿ ಹಾರಿದೆ

ಮೀನು ದಿಕ್ಕು ದಿಕ್ಕು ತಪ್ಪಿ.




[ವಸುಗುಪ್ತನ ಶಿವಸೂತ್ರದ ಒಂದು ಸೂತ್ರ]



ಯು. ಜಿ. ಯೂ, ಬೆಕ್ಕೂ……… (ರಚನೆಯೂ, ನಿರಚನೆಯೂ, ಸಂರಚನೆಯೂ )


ಆಗಾಗ ಬಂದೋಗುವ ಬೆಕ್ಕು

ಮಿಯಾಂ ಎಂದೆನ್ನಬಹುದಾದರೂ

ಸುಲಭಕ್ಕೆ ಅನ್ನುವುದೇ ಇಲ್ಲ. ಬಲು ಅಪರೂಪ

ಕಾಲಬಳಿಯಲ್ಲಿ ನುಸುಳಿದ್ದಿಲ್ಲ -

ಹಾಗೇ ತಿಳಿಯಬೇಕು

ಹಾಲು ಬೇಕೋ ಏಕಾಂತವೋ ಮತ್ತೊಂದೋ ಮಗದೊಂದೋ


ಯು. ಜಿ. ಗೆ ಕಿಟಕಿಗಳೂ ಬಾಗಿಲುಗಳೂ

ಎಂದರೆ ಅಷ್ಟಕ್ಕಷ್ಟೆ


ಸಾಕ್ರೆಟೀಸಿಗೆ ಕೊಟ್ಟ ವಿಷದ ಬಟ್ಟಲಲ್ಲಿ ನೊಣವೊಂದಿತ್ತು

ಚರಿತ್ರೆಕಾರನ ವಾದಕ್ಕೆ ಅದು ಬದುಕಿತ್ತು ಪ್ರತಿವಾದ

ಈ ಬೆಕ್ಕು ಬಲು ತರಲೆ

ವಿಶಿಷ್ಟತೆಗೆ ಅಡ್ಡಲಾಗಿ ಕಾಲುಚಾಚಿ

ಮಲಗಿದ ಧಿಮಾಕಿಗೆ

ನಾವ್ಯಾರಾದರೂ ಅದಕೆ ಲೆಕ್ಕವೇ ಇಲ್ಲ



ಪತ್ರಗಳಿಗೊಂದು ರೀತಿಯ ವಾಸನೆಯಿರುತ್ತದೆ

ಎಂಬುದು ಈ ಬೆಕ್ಕು ಹತ್ತಿರ ಬಂದಾಗೆಲ್ಲಾ

ಅನ್ನಿಸುವುದು ಆದರೂ

ನಿತ್ಯ ಪತ್ರಿಕೆ ತಿರುವಿಹಾಕುವಾಗಲೆಲ್ಲಾ

ವಾಸನೆ - ಬೆಕ್ಕಿನದೋ

ಮತ್ಯಾವುದರದೋ ತಿಳಿಯುವುದೇ ಇಲ್ಲ


ಜೀವವಿಜ್ಞಾನಕ್ಕೂ ಆತ್ಮಜ್ಞಾನಕ್ಕೂ

ನಡುವಲ್ಲಿ ಬೆಕ್ಕು ಕುಳಿತು

ಇಲಿ ಮೇಯುತ್ತಿರುತ್ತದೆಂಬುದು

ಅನಿರ್ವಚನೀಯವೆಂದೆನಿಸಿದರೂ ಸರಿಯೆಂಬ

ವಾದಕ್ಕೆ ಬೆಕ್ಕು ತಲೆಯಾಡಿಸುತ್ತಿರುತ್ತದೆ.


ಇದು ಹೀಗಿರಲಾಗಿ………


ರಚನೆ ವಿರಚನೆ ಹೇಗೋ

ಹಾಗೆಯೇ ಸ್ಮೃತಿ ವಿಸ್ಮೃತಿ


೫೦ ವರ್ಷಗಳ ಹಿಂದೆ"

ಪತ್ರಿಕೆಯ ಸಣ್ಣ ಅಂಕಣದಲ್ಲಿ

ತಾ ನಟಿಸಿದ ನಾಟಕದ ಅಂಕದಲ್ಲಿ

ಮೈ ಮರೆತು ನಟಿಸಲೋಗಿ

ನಿಜದ ಹಲ್ಲು ಮುರಿದದ್ದು

ಪ್ರಕಟವಾಗದೇ ಹೋದದ್ದು

ನನ್ನ ತಾತನಿಗೆ

ಕಾಫೀ ತೊರೆದು ಮುಖ ಊದಿಸಿಕೊಳ್ಳಲಿಕ್ಕೆ

ಕಾರಣವಾಗಿತ್ತು.


[ಯು. ಜಿ. ಎಂದರೆ ಯು. ಜಿ. ಕೃಷ್ಣಮೂರ್ತಿ ]

...




ಮಲ್ಲಿಗೆ ಗಿಡದ ತುಂಬೆಲ್ಲಾ ಹೂವು 
ಮಿಣುಕು ಹುಳಕ್ಕೆ ಸಮಯವೇ ಇಲ್ಲ 
ಗಂಧರ್ವರಿರಲೇ ಬೇಕು 
ಮಸಿಕುಡಿಕೆ ಒಡೆದಿದೆ 
ಮಸಿಯೂ ಮುಗಿದಿದೆ 
ಪೂರ್ಣವಿರಾಮಕ್ಕೆ ಚುಕ್ಕಿಯೊಂದು ಬಾಕಿ 


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

...




ಇಷ್ಟದ ರುಮಾಲು ಸುತ್ತಿ 
ಮನೆಗೆ ಹೊರಟೆ
ಗಟರದ ಇಲಿ ಜೋಡಿಯಾಗಿ 
ಕೊಂಬೆಯ ಅಳಿಲು ತಲೆಯೆತ್ತಿ 
ನೋಡುತ್ತಿದ್ದಾಗ 
ಅಲ್ಲೊಬ್ಬ ಯಾವ ಉಸಾಬರಿಯೂ ಇಲ್ಲದೆ
ಹೋಗುತ್ತಿದ್ದ.


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

...



ನಿನಗೇನರ್ಥವಾಯಿತು ಹೇಳು? 
ಈ ಹೆಸರನಿಡಿದು ಕೂಗಿದೆಯಲ್ಲ? 
ವಸಂತ ದಿಕ್ಕು ಬದಲಿಸಿದೆ 
ಚಲಿಸಿದೆ ಜೋರು ಗಾಳಿಗೆ 
ಬರೆದ ಕವನವನ್ನು ಒಪ್ಪಲೊಲ್ಲ 
ತಿದ್ದಿ ಬರೆದದ್ದು ಮತ್ತೆ 
ಕವನವಾಯಿತಲ್ಲ 

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

...



ಚಿಟ್ಟೆ ಹಾರಿ ಬಳಿದ ಬಣ್ಣದಿಂದ ತೆಗೆದ 
ಮಸಿ - ಬರೆದ ಹಲವು ಸಾಲು 
ಚಿಟ್ಟೆ ಎಲ್ಲಿ? ಸಾಲು ಕೇಳುತ್ತೆ 
ಮಳೆ ಗಾಳಿ ಗುಡುಗು ಮಿಂಚಿನ 
ಹೊಡೆತಕ್ಕೆ ಚಿಟ್ಟೆ ಮತ್ತೆ ಚಿಟ್ಟೆಯಾಗಲು 
ಎಲ್ಲಿವೆ ಸಾಲುಗಳು? 
ಚಿಟ್ಟೆಯ ಸರದಿಯೀಗ 
 

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

...



ಅಪ್ಪಿ ಬೆಳೆದ ಲತೆಯ ಹೂವೆ
ಹೊಲ ಹಬ್ಬಿ ಬೆಳೆದು 
ಕಾಳು ಕಡಿ ಹುಳ ಹುಪ್ಪಟೆ
ಭೂತಕ್ಕೊಗ್ಗುವ ಬಯಲು 
ಆಟಕ್ಕೆ ತಿರುಗಾಟಕ್ಕೆ 
ಮಿನುಗುತ್ತಿರುವ ದಿಬ್ಬದ ಮೇಲೇರಿದಾಗ
ಅದೊಂದು ಚಿತ್ರವಷ್ಟೆ. 


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

...


ಆಕಾಶಮಲ್ಲಿಗಾಗಿ  ಏರಿ 
ಹೂ ಅರಳುವ ಹೊತ್ತಲ್ಲಿ 
ಹಕ್ಕಿ ಬಂದು ಕೂತು 
“ಹಾ…ಬಂದೆ" 
ಎಂದನಂತೆ
ಪಕ್ಕದಲ್ಲಿದ್ದ ಅಳಿಲು ಹಾರಿ 
ಕರಿ ಮೋಡಕ್ಕೆ ಸುದ್ದಿಮುಟ್ಟುವಷ್ಟರಲ್ಲಿಲ್ಲಿ 
ಜೋರು ಮಳೆಯಾಗಿತ್ತು 






[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

...

ಮಂಡಿ ನೋವಿಗೆ
ಕಾವುಕೊಡುವ ಉಪ್ಪಿನ
ಬಿಸಿಗೆ ಶರಣಾಗಿದ್ದೇನೆ
ಸಮುದ್ರದಾಳದ ಡ್ರಾಗನ್
ಕಾರ್ಮುಗಿಲೇರಿ ಹಾರಿ
ಆಗಸಕ್ಕೆ ಮಳೆಯ ಸುರಿಸುತ್ತೆ
ತನ್ನ ಕೊನೆಯ ಕ್ಷಣದಲ್ಲಿ

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...

ಚಲಿಸುವ ಸಂಗತಿಗಳೆಲ್ಲಾ
ಮಂಜಿನ ಮನುಷ್ಯನ
ನರದ ಗಂಟಿಗೆ
ಸಿಕ್ಕಿ ಹಾಕಿಕೊಳ್ಳುತ್ತೆ
ಗಂಟು ಬಿಡಿಸಲು ಕೂರುವವ
ಮಂಜು ಕರಗುವುದ
ಗಮನಿಸುವುದಿಲ್ಲ

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...

ಚಂದ್ರನ ಹಡಗಿನಡಿ
ತಾವರೆಯ ಬೀಜಗಳು
ದಿಕ್ಕು ದಿಕ್ಕಿಗೆ ಚಲ್ಲಿವೆ
ಅದರ ಜಲವು ತುಟಿಗೆ
ತಾಕಿ ಎಚ್ಚರಾದಾಗ
ಚಲ್ಲಿದ ಬೀಜವು ಮೊಳಕೆ
ಒಡೆದಿತ್ತು

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...

ತಕರಾರಿಲ್ಲದ ಕವಿತೆಯೆಂದರೆ
ವಲಸೆ ಹಕ್ಕಿ ಕೂತ ಮರದೆಲೆ
ಉದುರುವುದಿಲ್ಲ
ಕೋಗಿಲೆಯ ಅಳು ನಿಂತಿಲ್ಲ
ಬಿಳೀ ಮೋಡಗಳೂ
ಕರೀ ಮೋಡಗಳೂ
ಖಾಲೀ ಅಕಾಶವೂ
ಎಲ್ಲವೂ ಉಂಟು


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...

ಅಕ್ಷರ ಬದುಕಿನ ರೂಪಕ
ಶಬ್ದ ರೂಪಕವಲ್ಲ
ಬದಲಿಗದುವೇ ಸೃಷ್ಟಿ
ಹೀಗೆ ನೋಡಲನುಗಾಣಿಸಿದವಳೇ
ಈಗ ನೋಡು
ಇಂತಿ ನಿನ್ನ

ಇವರಿಗಿದು ಕಾಲವಲ್ಲ


ಏಕಾಂತಕ್ಕಿದು ಕಾಲವಲ್ಲ
ಎಂಬೋ ತುರ್ತಿನ ಬರಹ
ವನ್ನೊಯ್ಯುವ ಕೊರಿಯರ್
ಹುಡುಗ ನಾಪತ್ತೆ -
ಛೆ ಪಾಪ! ಎಂದೇಳಿ
ಅಂತರ್ಜಾಲದಲ್ಲಿ   ಪ್ರಕಟಿಸಿ
ಹಿಂದೊಮ್ಮೆ ಹೊಲದ ಮಣ್ಣಲ್ಲಿ
ನೀರಲ್ಲಿ ಮರದಡಿಯಲ್ಲಿ
ನಿಂತಿದ್ದ ಫೋಟೋ ಲಗತ್ತಿಸಿದೆ

ಒಮ್ಮೆ ಅವನ ಮಕ್ಕಳಿಗೆ
ಪೆಪ್ಪರುಮೆಂಟು ಕೊಟ್ಟ ನೆನಪಿದೆ
ಈಗಿದ್ದಿದ್ದರೆ, ಡಾರ್ಕ್ ಚಾಕಲೇಟು ಕೊಡಬಹುದಿತ್ತು
ಪಕ್ಕದ ಮನೆಯ ಮಕ್ಕಳು ಬಿಡಿ
ಹಿರಿಯರೂ ಬರುವುದಿಲ್ಲ ಹತ್ತಿರಕೆ
ಸಾಮಾಜಿಕ ಅಂತರ
ಮನುಷ್ಯ ಮನುಷ್ಯರ ನಡುವೆ

ಅವಶ್ಯ  ಇದೇ ರೀತಿ ಎಂಬುದು
ಲಿಖಿತ ಶಾಸನವಂತೆ
ಒಮ್ಮೆ ಅವನ ಹೆಂಡತಿ ಅಳುತ್ತ
ಬಂದು ಹೇಳಿದ್ದಳು
ಬಂಗಾರದಂಗಡಿಯಲ್ಲಿ ಸ್ವಾಗತಿಸುವಾಗ
ಶೌಚಕ್ಕೋಗಲಾರದೆಯೂ ನಗುಮುಖ ತೋರುವುದನ್ನ

ಕಂಪನಿ ಆಯೋಜಿಸಿದ ವಾರ್ಷಿಕ ಮ್ಯಾರಥಾನ್ ಓಟದಲ್ಲಿ
ಗೆದ್ದ ಬಂಗಾರ ಬಣ್ಣದ ಪಲಕವನ್ನ
ಶೋಕೇಸಿನಲ್ಲಿಟ್ಟು ಸಿಹಿ ಹಂಚುವಾಗ
ಬಂದಿದ್ದ ಈ ಹುಡುಗ, ನೆನಪಿದೆ
“ಬಿಡಿ ಸಾರ್, ನಾನು ದಿನಕ್ಕೇ ಅಷ್ಟು ನಡೀತೀನಿ"
ಎಂಥಹ ದಾರ್ಷ್ಟ್ಯ
ಬಿಟ್ಟೇನೆಯೆ - ಗೆಲ್ಲು ನೋಡುವ ಎಂದು
ಮರು ಸವಾಲೆಸೆದಿದ್ದೆ
ರಾತ್ರಿ ಹತ್ತಿತ್ತು ನೆಮ್ಮದಿಯ ನಿದ್ದೆ

ಅದನ್ನೇ ನೆನಪಿಟ್ಟುಕೊಂಡಿದ್ದನೋ ಏನೋ
ಊರಿಗೆ ನಡೆದೇ ಹೋಗುತ್ತೇನೆಂದವನು
ಊರಿಗೋಗಲೇ ಇಲ್ಲವಂತೆ

ಮುಂದಿನ ಮ್ಯಾರಥಾನನ್ನು ಅವನ
ನೆನಪಿನ ಮ್ಯಾರಥಾನೆಂದೇ  ಹೆಸರಿಸಬೇಕು
ಅವನ ಹೆಸರಲಿ ಮೊದಲ ಬಹುಮಾನ
ಆಕೆಯ ಹೆಸರಿಲಿ ಎರಡನೆಯದು
ಆ ಮಗುವ ಹೆಸರಲಿ ಮೂರನೆಯದು
ಬಹುಷಃ ಈಗ ನಿದ್ರೆ ಬರಬಹುದೋ ಏನೋ
ಎಂದು ಮಲಗಿದ್ದವನಿಗೆ
ಎಚ್ಚರಾದಾಗ ನೆನಪಾದದ್ದು
ಅವರುಗಳ ಹೆಸರೇ ಗೊತ್ತಿಲ್ಲವೆಂದು   
 

...

ಇಳಿ ಸಂಜೆ
ಹೂ ಅರಳುತ್ತಿದೆ
ಬೆಣಚುಕಲ್ಲಿನ ಕೆಳಗರಿವ ನೀರು ತಂಪು
ಚಿಟ್ಟೆಗಳಾರುತ್ತಿವೆ 
ಮಿಣುಕುಹುಳು ಬಂದು
ಬೊಗಸೆಯೊಳಗೆ ಕೂತು
ಬೆಳಕ ಚಲ್ಲಿದೆ
ಬೆಳಗಾಗುವ ಹೊತ್ತು

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...


ಹಿಂತಿರುಗಿ ಕಣಿವೆಯೆಡೆಗೆ
ವಾಸಿಸುವವರಾರೂ ಇಲ್ಲ
ಕೋಗಿಲೆ ಒಂದೇ ಸಮನೆ
ಕೂಗುತ್ತಲೇ ಇದೆ
ಚಳಿಗಾಲದ ಮಂಜಿನ ಮುಸುಕು
ಹೊದ್ದ ಹುಲ್ಲು
ಬಿಸಿಲಿಗೆ ಮೈ ಬಿಚ್ಚಿದೆ
ಬೀಳ್ಕೊಡಬೇಕಲ್ಲ
ಎಲ್ಲಕ್ಕೂ ಎಲ್ಲವನ್ನೂ


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...



ಏಳು ಬಣ್ಣದ ಹೂವೆ
ಕಾಲಕ್ಕೆ, ಬೆಳಕಿಗೆ ಗಾಳಿಗೆ ಮಣ್ಣಿಗೆ
ತಕ್ಕಂತೆ ಬಣ್ಣ
ಬದಲಾಗುತ್ತಾ ಬದಲಾಗುತ್ತಾ
ಇಗೋ ತಿರುಗಿದ್ದೇನೆ
ನಿನ್ನದೇ ಬಣ್ಣಕ್ಕೆ 



[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...

"ತೀವ್ರವಾಗಿ ಈ ಬದುಕ ಆಸ್ವಾದಿಸಿದ್ದೇನೆ "
ಪಾಳು ಬಿದ್ದ ಮನೆಗೋಗುವ
ಮುರಿದ ಸೇತುವೆ ಕೆಳಗೆ
ಇದ್ದಾಗ
ಹೋದ ತೋಸೈನ
ಪತ್ರದಲ್ಲಿದ್ದ ಸಾಲುಗಳಿವು

ಭಿಕ್ಷು ಅಲ್ಲ ತಿರುಕ
ತಿರುಪೆ ಎತ್ತುವವ
ಸದಾ ಹರಕು ಬಟ್ಟೆ
ನೆಲೆ ಬೇಡದೆ ಅಲೆದದ್ದು
ಕಂಡ ಕಂಡಲ್ಲೆಲ್ಲಾ

ಒಮ್ಮೆ ಹೀಗಾಯಿತು
ತಿರುಕನೊಬ್ಬ ಸತ್ತಿದ್ದ
ಉಳಿದಿತ್ತು ಅವನೆತ್ತಿದ್ದ ತಿರುಪೆ ಅನ್ನ
ದೇಹವನ್ನು ಸುಟ್ಟು ಬಂದವ
ತಿನ್ನುತ್ತಾ ಕೂತ ಆ ಅನ್ನವನ್ನು
ಆಹಾ ರುಚಿಯೆ ಎಂದು


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

...

ಆ ಕಾಲದಲ್ಲಿ ಆಕಾಶವನ್ನು
ನಂತರದಲ್ಲಿ ಭೂಮಿಯನ್ನು
ಬೆಂಬಲಿಸಿದೆ
ಆಗ ಡ್ರಾಗನ್ ಆಗಿದ್ದೆ
ನಂತರ ಕಾಳ ಸರ್ಪ
ಮನ ಬಂದಂತೆ ತಿರುಗಾಡಿದೆ
ನನ್ನಿಚ್ಛೆಯಂತೆ  ಕೊಡುತ್ತೇನೆ
ನನ್ನಿಚ್ಛೆಯಂತೆ ತೆಗೆದುಕೊಳ್ಳುತ್ತೇನೆ
ಹಲ್ಲುಗಳಿಂದ ಚಿರತೆಯನ್ನು ಕಡಿಯುತ್ತೇನೆ
ನನ್ನ ಚೈತನ್ಯ ಪರ್ವತಗಳನ್ನು  ಪುಡಿಯಾಗಿಸುತ್ತೆ

ನನ್ನ ದೇಹದ ಯಾವ ಮೂಳೆಯೂ ಪವಿತ್ರವಲ್ಲ
ಇದು ಕೊಳೆಯುತ್ತಿರುವ ಮೂಳೆಗಳ ಬೂದಿಯ ರಾಶಿ
ಆಳಕ್ಕೆ ತೋಡಿ ಹೂತಿಡಿ
ಇದರದೊಂದು ಧೂಳಿನ ಕಣವೂ
ಕಲೆಯಾಗಿಸಬಾರದು
ಈ ಹಸಿರ ಪರ್ವತಗಳನ್ನು


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

...

ಯಾರು ಬರುತ್ತಾನೋ ಅವನಿಗೆ
ಅವನ ಬರುವಿಕೆ ಮಾತ್ರಾ ಗೊತ್ತು
ಯಾರು ಹೋಗುತ್ತಾನೋ ಅವನಿಗೆ
ಅವನ ಹೋಗುವಿಕೆ ಮಾತ್ರಾ ಗೊತ್ತು
ಈ ಕಂದರದಿಂದ ಉಳಿಯಬೇಕಾದರೆ
ಕಡಿದಾದ ಭಾಗಕ್ಕೇಕೆ ಅಂಟಿಕೊಳ್ಳಬೇಕು
ಮೋಡಗಳು ಕೆಳಗೆ ತೇಲುತ್ತಿವೆ
ಎಂದಿಗೂ ತಿಳಿಯದು ಗಾಳಿ ಇವುಗಳನ್ನು
ಎತ್ತ ಕೊಂಡೊಯ್ಯುತ್ತದೆಂದು.


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

ಪ್ರತಿಮಾ ಸೃಷ್ಟಿ

ಬೆಂಕಿ ಇಲ್ಲ  ವಿಪರೀತ ಚಳಿ
ದಿನ ಪತ್ರಿಕೆಗಳು 
ಸುಮಾರು ಹಲವಾರು ಕಾಲದ್ದು
ಕತ್ತರಿಸಿ ಉರಿವ ಬೆಂಕಿ ಚಿತ್ರಗಳ  
ಶಿರೋನಾಮೆಯ ಸಹಿತ
ಕೈ ಕಟ್ಟಿ ಕುಳಿತು
ಹರವಿಕೊಂಡು ಮುಂದೆ
ವಿಪರೀತ ಚಳಿ

ಹೊತ್ತಲ್ಲದ ಹೊತ್ತು
ಪತ್ರ ಮಾರಲಿಕ್ಕಲ್ಲ ತೂಕಕ್ಕೆ
ತುಕ್ಕಿನ ಪೋಸ್ಟ್  ಬಾಕ್ಸುಗಳು
ಸಂಗ್ರಹಕಾರನ ಸ್ವತ್ತು
ಎಂಟಾಣೆ ಸ್ಟಾಂಪ್ ಕಾಗದವೂ

ಹೂವು ಪಾರಿಜಾತ
ಅತೀ ಸಣ್ಣಗೆ ಸೂಕ್ಷ್ಮ
ಕೊಯ್ದ ರಕ್ತನಾಳ
ಕಳೆದ ಚೂಡಾಮಣಿ
ನೆನಪು ಆಕಾಶಮಲ್ಲಿಗೆ
ಬಿದ್ದಿರಲೇ ಬೇಕು ಈ ಜೋರು ಮಳೆಗೆ 

ಜೀರುಂಡೆ ಪಳ ಪಳ
ತಾಕಿ ಬಣ್ಣ ಮೈ ಬದಲಾಗಿ
ಚೀರುತ್ತಿದೆ ಹಕ್ಕಿ
ಯಾಕಾಗೋ ಏನು  ಕತೆಯೋ
ಡೆಲಿವರಿಗೆ ಬಂದ ಬಾಕ್ಸೊಳಗಿನ
ಗಡಿಯಾರದ ಟಿಕ್ ಟಿಕ್ ಸದ್ದಿಗೆ
ಮಧ್ಯವಯಸ್ಕನ ಎಪ್ಪತ್ತರ ದಶಕದ
ಭಾವಗೀತೆಗೆ
ಅಮಲು ಮೈಲಿಗೆ

ರೆಕ್ಕೆಯಿಲ್ಲದೆ ಬಿದ್ದಿದೆ ರಾಶಿ
ಎಲ್ಲೆಂದರಲ್ಲೆ ರಾತ್ರಿ ಮಳೆಗೆ
ಮಳೆಹುಳು   ಗೆದ್ದಲು
ಹುತ್ತದೊಳಗಿಂದೆಲ್ಲವೂ ಒಮ್ಮೆಗೆ
ಹಾರಿವೆ ರೆಕ್ಕೆ ಬಡಿದು
ಇರುವೆ ಜಿರಲೆ ಹಕ್ಕಿ ಕಾಗೆ
ಬರೋಬ್ಬರಿ ಭೋಜನ
ಮಳೆ ಬರುವ ಹೊತ್ತು

ಜೋರು ಮಳೆ 
ಧಗಧಗನುರಿವ ಹಸಿರು ಮರ  
ಮರದ್ದು ಹೊಸಿಲು
ಮನೆ ದೂರ
ನೆಂದಿದ್ದೇನೆ, ಭಯ ಬಿದ್ದಿದ್ದೇನೆ
ಚಳಿಯಿದೆ, ಬೆಂಕಿ ಉರಿಯುತ್ತಿದೆ. 

ಮಳೆ ಬಂದು ನಿಂತ ನೀರು
ಮರಗಳೆಲೆಯ
ಬಿಂಬವ ಫೋಟೋ ತೆಗೆಯಬೇಕು
ಕೊಂಬೆಯ ಮೇಲಿನ ಹಕ್ಕಿ ಹಾರಿದೆ
ಬಿದ್ದ ಹನಿ ನೀರು
ಎಲ್ಲವನ್ನೂ ಕದಡಿದೆ 

...

ಕಾಲು ಚಾಚಿ ಆಕಳಿಸಿದ ಗೂಡೋ
“ಶಿಷ್ಯರೇ ……"
ತಿರುಗಾಟದ ಬಿಕ್ಷು
ಕೈ ಕೋಲು ಮುರಿದು ಕೊಡೆ ಹರಿದಾಗ
ಹೇಳಿದ - ಬುದ್ಧನದ್ದು ಬಹಳ ಸುಲಭ
ಹಸಿದಾಗ ತಿನ್ನು ಬಾಯಾರಿದಾಗ ಚಾ ಕುಡಿ
ಚಳಿಯಾದಾಗ ಬೆಚ್ಚಗೆ ಹೊದೆ
ಅಷ್ಟೇ ….

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...


ನೆಲವ ಜೋರು ಕುಟ್ಟಿ
ಕೋಲ ತುದಿಯಿಂದ
ಗೋಕು ಹೇಳಿದ
ಬುದ್ಧನೊಳಗಿರುವ
ಭೂತ ವರ್ತಮಾನ ಭವಿಷ್ಯದ
ಸತ್ಯವೂ
ನಂಬಿಕೆಯ ಪೂರ್ವೀಕರಿಂದ ಪಡೆದೆದ್ದೆಲ್ಲವೂ
ಈ ಕೋಲ ತುದಿಯಲ್ಲಿದೆ
ನೋಡಿ ನೋಡಿ
ಎಂದೇಳುತ್ತಲೇ ಮೇಲೆದ್ದವ
ಹಾಗೇ  ಹೊರಟು ಹೋದ



[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...

ಡೈಗು ಎಂದರೇನೇ  ಶತ ಮೂರ್ಖ
ಹೆಸರು, ಅವನಿಗವನೇ ಇಟ್ಟುಕೊಂಡ
ಮಹಾನ್ ಕುಡುಕ
ಅಮಲು ಕೋಪಿಷ್ಠ ಸದಾ
ಮಾತೆತ್ತಿದರೆ ಬೈಗಳು, ಬಿಕ್ಷು

“ವೃಣ ಶರೀರವನ್ನು ಸೂಜಿಗಳು ಚುಚ್ಚುತ್ತಿವೆ
ಬದುಕೆಂಬುದು ಖಾಯಿಲೆಯಂತೆ - ಏನಿದರರ್ಥ ?
ಕಣ್ಣಿಗೇನೇನು ಕಾಣುತ್ತದೆಯೋ ಎಲ್ಲವೂ
ನಿಜವಾಗಿಯಾದರೆ ಒಂದೇ ದಿನದಲ್ಲರಳುವ ಹೂವು ಮಾತ್ರ"


ಮೂರು ದಿನ ಮುಂಚೆ
ಚರಮ ಗೀತೆ ಬರೆದ
“ತಾನೆಷ್ಟು ವಿಶಿಷ್ಟನೆಂದು"
ಮೂರು ದಿನದ ನಂತರ
ಕಾಗದ ಕೇಳಿದ
ತಂದವನನ್ನು ಹೊಡೆದು ಅಟ್ಟಿದ
ಮೂರನೆ ದಿನ ಇಲ್ಲವಾದ.


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]