ಪ್ರಾರ್ಥನೆ



ಗಣಪ ಶರಣೆಂಬೆ

ಚಲಿಪ ಜಗವ ಸುಡುವ ಒಡಲ

ನಡುವೆ ಬೆಳೆವ ಕಾಣಿಸುವ ಜಗದ

ಅಧಿನಾಯಕಂಗೆ ಶರಣೆಂಬೆ


ತಿರು ತಿರುಗಿ ಸುರುಳಿ ಭದ್ರ ನೆಲೆ

ಹೊತ್ತುರಿದಿದೆ ಉರಿ ಭುವಿಯಿಂ ಬಾನಿನೆಡೆಗೆ

ಮೈಯೆಲ್ಲಾ ಕಪ್ಪು ಸುಟ್ಟ ಬೂದಿ

ಹೊಸದು ಹೊಸದು ಇದು


ಮುಗುಳು ನಗೆ ಮುಗ್ಧ ನಗೆ

ಕಣ್ಮುಚ್ಚಿದರೆ ಎದೆಯುಕ್ಕಿ ಕಣ್ಣಲ್ಲಿ ಹರಿದು

ಮೈಯೆಲ್ಲಾ ತೋಯ್ದು

ಅದೆಂತ ಬಾಲೆಯವ್ವ ನೀನು

ಮಗು ಅವ್ವ ನಾನು


ಹರಿವಿಗೆಲ್ಲಿಯ ಹೊಣೆ

ಅಣು, ಅಣುವಿನಣು

ತುಂಬಿ ತುಂಬುರನ

ಮೇರೆ ಮೀರಿ ಮೀಟಿದೆ

ಬೆತ್ತಲೆ ಮೈಯ ಕುಣಿತಕ್ಕೆ

ಯಾರ ಹೊಣೆ

ನಿಂತ ಮೇಲೆ ಉಳಿವುದೇನು

ಇಲ್ಲ ಎಂದರೆ ಇದೇಯಾ ?


ಹೊಸ ಮುಖ ಹೊಚ್ಚ ಹೊಸದಾಗಿ

ನನ್ನನ್ನೇ ಮರೆಸಿ ನೆನಪಿಸುವಂತೆ

ಪದಗಳೆಲ್ಲಾ ಬರೀ ಅಕ್ಷರಗಳಾಗಿ

ಅಕ್ಷರಗಳೆಲ್ಲಾ ದೈವವಾಗಿವೆ


ಶಾಂತಿಃ ಶಾಂತಿಃ ಶಾಂತಿಃ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ