...

ಡೈಗು ಎಂದರೇನೇ  ಶತ ಮೂರ್ಖ
ಹೆಸರು, ಅವನಿಗವನೇ ಇಟ್ಟುಕೊಂಡ
ಮಹಾನ್ ಕುಡುಕ
ಅಮಲು ಕೋಪಿಷ್ಠ ಸದಾ
ಮಾತೆತ್ತಿದರೆ ಬೈಗಳು, ಬಿಕ್ಷು

“ವೃಣ ಶರೀರವನ್ನು ಸೂಜಿಗಳು ಚುಚ್ಚುತ್ತಿವೆ
ಬದುಕೆಂಬುದು ಖಾಯಿಲೆಯಂತೆ - ಏನಿದರರ್ಥ ?
ಕಣ್ಣಿಗೇನೇನು ಕಾಣುತ್ತದೆಯೋ ಎಲ್ಲವೂ
ನಿಜವಾಗಿಯಾದರೆ ಒಂದೇ ದಿನದಲ್ಲರಳುವ ಹೂವು ಮಾತ್ರ"


ಮೂರು ದಿನ ಮುಂಚೆ
ಚರಮ ಗೀತೆ ಬರೆದ
“ತಾನೆಷ್ಟು ವಿಶಿಷ್ಟನೆಂದು"
ಮೂರು ದಿನದ ನಂತರ
ಕಾಗದ ಕೇಳಿದ
ತಂದವನನ್ನು ಹೊಡೆದು ಅಟ್ಟಿದ
ಮೂರನೆ ದಿನ ಇಲ್ಲವಾದ.


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ