...


ನೆಲವ ಜೋರು ಕುಟ್ಟಿ
ಕೋಲ ತುದಿಯಿಂದ
ಗೋಕು ಹೇಳಿದ
ಬುದ್ಧನೊಳಗಿರುವ
ಭೂತ ವರ್ತಮಾನ ಭವಿಷ್ಯದ
ಸತ್ಯವೂ
ನಂಬಿಕೆಯ ಪೂರ್ವೀಕರಿಂದ ಪಡೆದೆದ್ದೆಲ್ಲವೂ
ಈ ಕೋಲ ತುದಿಯಲ್ಲಿದೆ
ನೋಡಿ ನೋಡಿ
ಎಂದೇಳುತ್ತಲೇ ಮೇಲೆದ್ದವ
ಹಾಗೇ  ಹೊರಟು ಹೋದ



[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

1 ಕಾಮೆಂಟ್‌: