...

ಕಾಲು ಚಾಚಿ ಆಕಳಿಸಿದ ಗೂಡೋ
“ಶಿಷ್ಯರೇ ……"
ತಿರುಗಾಟದ ಬಿಕ್ಷು
ಕೈ ಕೋಲು ಮುರಿದು ಕೊಡೆ ಹರಿದಾಗ
ಹೇಳಿದ - ಬುದ್ಧನದ್ದು ಬಹಳ ಸುಲಭ
ಹಸಿದಾಗ ತಿನ್ನು ಬಾಯಾರಿದಾಗ ಚಾ ಕುಡಿ
ಚಳಿಯಾದಾಗ ಬೆಚ್ಚಗೆ ಹೊದೆ
ಅಷ್ಟೇ ….

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

2 ಕಾಮೆಂಟ್‌ಗಳು: