ವಾರಣಾಸಿ

 


ಇದೊಂದು ಮಹಾ ಸ್ಮಶಾನ 

ಹಗಲು ಕಾಯುವವನು ಆ ಕಾಲ ಭೈರವನು 

ರಾತ್ರಿಗೆ  ಬರುವಳಮ್ಮ 

ಆ ವರಾಹಿ ತಾಯಿಯು 

ಕತ್ತಲೆಯಲಿ ಕಾಯುವವಳು 

ಕತ್ತಲಾಗಿ ಪೊರೆಯುವವಳು 


ಕಣ್ಣದೊಂದು ವಿಶಾಲ 

ಕಾಣುವುದೆಲ್ಲಾ ಅದರ ಬಗೆಯೂ 

ಕಾಣದಿರುವುದದರ ಬಗೆಯು 

ದಂಡಪಾಣಿ ಹಿಡಿದ ದಂಡ 

ಕೆಳಗಿನಿಂದ ಮೇಲಕ್ಕೆ 

ದುಂಡಿರಾಜ ಕೂತನಂತೆ   

ಹೋ ಹೋ ನಗುತ್ತಾ 


ಎಲ್ಲಿ ಕಂಡರಲ್ಲಿ ಚೆಲುವು 

ಆ ಬಿಂದುವಿನಿಂದ ಬಂದ ಸೊಗವು 

ಮಾಧವನೋ ಮಾಧವಿಯೋ 

ಹರಿವುದದನು ಕೇಳು ಮತ್ತೆ 

ಆ ಹರಿಯನು ಕೇಳು ಮತ್ತೆ 


ತೈಲಿಂಗನು ಕೂತನಲ್ಲಿ 

ಎದುರಿಗಿರುವಳು  ಮಹಾ ಕಾಲಿ 

ಆ ಕಲ್ಲ ನಂದಿಯ 

ಕಾಲ ನೇವರಿಸಿದರು 

ಕೊರಳ ಮುದ್ದಿಸಿದರು 

ಹೇಗಿರುವೆಯೋ ನಂದಿ 

ಜೀವ ಕರಗುವಂತೆ 

ಕೇಳಿದರವರು 

ಲಿಂಗವಾ ಮೀರಿದ ತೈಲಿಂಗ ಸಾಮಿಯು 


ಅನ್ನವಿದೆಲ್ಲ 

ಅನ್ನವೇ ಅನ್ನವ ತಿನ್ನುವುದಿಲ್ಲಿ ಎಲ್ಲ 

ಅನ್ನವೇ ಪೂರ್ಣವಿಲ್ಲಿ ಅನ್ನ ಪೂರಣಿ 

ಹೊತ್ತಿಸಮ್ಮ ಉರಿಸಮ್ಮ 

ಕೆಳಗಿನಿಂದ ಮೇಲಕಿಲ್ಲಿ 

ಓ  ತ್ರಿಪುರ ಭೈರವಿ 

ಎಲ್ಲವನೂ ಕಟ್ಟಿನಿಂದ ಕಟ್ಟಿಟ್ಟು 

ಬಚ್ಚಿಟ್ಟವಳು ನೀನಲ್ಲವೇ ದುರ್ಗಿಯಲ್ಲವೆ 


ಇದೊಂದು ಮಹಾ ಸ್ಮಶಾನವೆಂದೆ 

ಅದಕೆ ನೀನು ಒಡತಿಯೆಂದೆ 

ಸುಂದರಳಲ್ಲವೇ 

ಮೂರು ಪುರದ ಸುಂದರಳಲ್ಲವೇ 

ಕಾಲಿಯಲ್ಲವೇ 

ಮಹಾ ಸುಂದರ ಕಾಲಿಯಲ್ಲವೇ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ