...



ನಿನಗೇನರ್ಥವಾಯಿತು ಹೇಳು? 
ಈ ಹೆಸರನಿಡಿದು ಕೂಗಿದೆಯಲ್ಲ? 
ವಸಂತ ದಿಕ್ಕು ಬದಲಿಸಿದೆ 
ಚಲಿಸಿದೆ ಜೋರು ಗಾಳಿಗೆ 
ಬರೆದ ಕವನವನ್ನು ಒಪ್ಪಲೊಲ್ಲ 
ತಿದ್ದಿ ಬರೆದದ್ದು ಮತ್ತೆ 
ಕವನವಾಯಿತಲ್ಲ 

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ